ಕೊಳವೆಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ಕೊಳವೇ ಬಾವಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಇಬ್ಬರು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯಲ್ಲಿ ರೀಬೋರಿಂಗ್ ಕಾರ್ಯ ನಡೆಯುತ್ತಿತ್ತು, ಈ ಸಂದರ್ಭ ಶಂಕರಪ್ಪ ಮತ್ತು ಬಸವರಾಜು ಮಣ್ಣು ಕುಸಿದ ಪರಿಣಾಮ ಕೊಳವೆಬಾವಿಯಲ್ಲಿ ಸಿಲುಕಿದ್ದಾರೆ.
ಈಗ ಕೊಳವೆಬಾವಿಯಲ್ಲಿ ಸಿಲುಕಿರುವ ಶಂಕರಪ್ಪ ಎಂಬುವವರ ಜಮೀನಿನಲ್ಲೇ ನಡೆದಿರುವ ಘಟನೆ ಇದು. 30 ವರ್ಷದ ಪ್ರಾಯದ ಶಂಕರಪ್ಪಗೆ 3 ಮಕ್ಕಳಿದ್ದಾರೆ.