ಜಾರಕಿಹೊಳಿ ದೊಡ್ಡ ನಾಯಕರಲ್ಲ, ಮಾಧ್ಯಮಗಳೇ ಆ ರೀತಿ ಬಿಂಬಿಸುತ್ತಿವೆ: ವೀರಪ್ಪ ಮೊಯಿಲಿ
ಜಾರಕಿಹೊಳಿ ಸಹೋದರರು ದೊಡ್ಡ ನಾಯಕರೇನೂ ಅಲ್ಲ. ಮಾಧ್ಯಮಗಳು ಆ ರೀತಿ ಬಿಂಬಿಸುತ್ತಿವೆ ಅಷ್ಟೆ. ಅವರಿಂದ ಕಾಂಗ್ರೆಸ್ ಪಕ್ಷ ಮತ್ತು ಮೈತ್ರಿ ಸರ್ಕಾರವನ್ನು ಉರುಳಿಸಲು ಆಗಲ್ಲ ಎಂದಿದ್ದಾರೆ.
ಇನ್ನು ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಬಗ್ಗೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಆರೋಪ ಮಾಡಿದ್ದಾರೆಂದರೆ ಅದರಲ್ಲಿ ಸತ್ಯಾಂಶವಿರುತ್ತದೆ. ಒಂದು ವೇಳೆ ಬಿಜೆಪಿ ಈ ಕೆಲಸಕ್ಕೆ ಕೈ ಹಾಕಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷದ ಸಂಸದರ ಸ್ಥಾನ ಎರಡರಿಂದ ಮೂರಕ್ಕೆ ಇಳಿಯಬಹುದು ಎಂದು ಎಚ್ಚರಿಸಿದ್ದಾರೆ.