ಮಲ್ಲೇಶ್ವರಂ ನ ಗಲ್ಲಿ ಗಲ್ಲಿ ಯಲ್ಲೂ ವೀಕ್ಷಣೆ ಮತ್ತು ಪರಿಶೀಲನೆ

ಶುಕ್ರವಾರ, 6 ಜನವರಿ 2023 (20:44 IST)
ಪಶ್ಚಿಮ ವಲಯದ ಮಲ್ಲೇಶ್ವರಂ ಉಪ ವಿಭಾಗಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರೀನಾಥ್ ಅಧಿಕಾರಿಗಳೋಡನೆ ಭೇಟಿ ನೀಡಿ‌ ಕಾಮಗಾರಿ ಪರಿಶೀಲನೆ ನಡೆಸಿದಾರೆ.
 
ಈ ವೇಳೆ ಮಾತನಾಡಿದ ತುಷಾರ್ ಗಿರನಾಥ್ ಮರಗಳಿಗೆ ಕೇಬಲ್ ವಯರ್ ತಾಕದಂತೆ ಕ್ರಮ ವಹಿಸಿ ,ಮಲ್ಲೇಶ್ವರಂ ನಲ್ಲಿ ಮೋರಿಗಳ ಪರಿಶೀಲನೆ ನಡೆಸಿ,ಮಲ್ಲೇಶ್ವರಂ ನ ಗಲ್ಲಿ ಗಲ್ಲಿ ಯಲ್ಲೂ ವೀಕ್ಷಣೆ ಮತ್ತು ಪರಿಶೀಲನೆ ನಡೆಸಿದ್ರು.ಪುಪಾಟ್ ಮೇಲೆ ಜನರಿಗೆ ಸಲೀಸಾಗಿ ನಡೆದಾಡಲು ಅವಕಾಶ ಕಲ್ಪಿಸುವಂತೆ,ಕಸನಿರ್ವಾಹಣೆ, ಮರದ ತೊಂಗೆ ಗಳ ಕಟಾವು ಬಗ್ಗೆ ಸರಿಯಾದ ಕ್ರಮ ವಹಿಸಲು ಸೂಚನೆ ನೀಡಿದ್ದು,ಕೊಳಚೆ ಪ್ರದೇಶಗಳಿಗೂ ಮುಂದಿನ ದಿನಗಳಲ್ಲಿ ಭೇಟಿ ನೀಡುವುದಾಗಿ ತುಷಾರ್ ಗಿರಿ ನಾಥ್ ಹೇಳಿದ್ರು.
 
ಅಲ್ಲದೇ ಜನರೇ ಸಮಸ್ಯೆಗಳ ಬಗ್ಗೆ ಫೀಡ್ ಬ್ಯಾಕ್ ನೀಡಿದರೆ ನಮಗೆ ಸುಲಭ ಆಗುತ್ತೆ.ಕಂದಾಯ ಸರ್ವೆ ರಿಪೋರ್ಟ್ ಆಗ್ತಾ ಇದೆ.ನೋಟಿಸ್ ನೀಡಿ ಒತ್ತುವರಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ