ಜೆಡಿಎಸ್ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಹೇಳಿದ್ದೇನು?

ಸೋಮವಾರ, 28 ಅಕ್ಟೋಬರ್ 2019 (14:03 IST)
ರಾಮನಗರ : ಡಿಕೆಶಿ ಜೆಡಿಎಸ್ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಇದೀಗ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.



ನಾನು ಪಕ್ಷಾತೀತ ನಾಯಕ, ನನಗೆ ಎಲ್ಲ ವರ್ಗದವರ ಆಶೀರ್ವಾದವಿದೆ. ನಾನು ಜೈಲಿನಿಂದ ಹೊರಬರಲೆಂದು ಎಲ್ಲ ಸಮಾಜ, ಪಕ್ಷ, ಸಂಘಟನೆಗಳು ಪಕ್ಷಾತೀತವಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಅಷ್ಟೇ ಅಲ್ಲದೇ ನಾನು ಏರ್ ಪೋರ್ಟ್ ನಿಂದ ಬರುವಾಗ ಜೆಡಿಎಸ್ ಕಾರ್ಯಕರ್ತರು ದಾರಿಯಲ್ಲಿ ನಿಂತು ಹಾರೈಸಿದರು, ನಾನು ಜೈಲಿನಲ್ಲಿದ್ದಾಗ ಕುಮಾರಸ್ವಾಮಿ ನನ್ನನ್ನು ನೋಡಲು ಬಂದಿದ್ದರು. ಅವರನ್ನು ಬರಬೇಡಿ ಎಂದು ನಾನು ಹೇಳಲು ಆಗುತ್ತದೆಯೇ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ