ಆತನ ಮುಂದೆ ಜಿಗಿದಾಡಿದ ಚಿರತೆ ಮಾಡಿದ್ದೇನು?

ಭಾನುವಾರ, 20 ಅಕ್ಟೋಬರ್ 2019 (18:23 IST)
ರೇಷ್ಮೆ ಗೂಡಿನಲ್ಲಿ ಏಕಾಏಕಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ವಡೆಯರಾಯನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಿದ್ದಪ್ಪ ಬಣಕಾರ ಎಂಬುವರಿಗೆ ಸೇರಿದ್ದ ರೇಷ್ಮೆ ಗೂಡಿನಲ್ಲಿಯೇ ಚಿರತೆ ಪ್ರತ್ಯಕ್ಷವಾಗಿದೆ. ಸಿದ್ದಪ್ಪ ರೇಷ್ಮೆ ಗೂಡಿನಲ್ಲಿದ್ದ ಆಕಳ ಕರುವನ್ನು ನೋಡಲು ಹೋಗಿದ್ದರು. ಆ ವೇಳೆಯಲ್ಲಿ ಒಳಗೆ ಹೋಗುತ್ತಿದ್ದಂತೆ ಸಿದ್ದಪ್ಪನ ಮುಂದೆ ಜಿಗಿದು ಚಿರತೆ ಅಟ್ಟವನ್ನು ಏರಿ ಕುಳಿತಿದೆ.

ತಕ್ಷಣವೇ ಆಕಳು ಕರುವನ್ನು ಹೊರಗೆ ಏಳೆದ ರೈತ ಸಿದ್ದಪ್ಪ ಬಾಗಿಲು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯಲು ಮುಂದಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ