ಡಿ.5ರಂದು ಕರ್ನಾಟಕ ಬಂದ್ ಬಗ್ಗೆ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದೇನು?

ಸೋಮವಾರ, 23 ನವೆಂಬರ್ 2020 (13:31 IST)
ಬೆಂಗಳೂರು : ಮಸ್ಕಿ, ಬಸವಕಲ್ಯಾಣ ಬೈ ಎಲೆಕ್ಷನ್ ವಿಚಾರಕ್ಕೆ ಸಂಬಂಧಿಸಿದಂತೆ  ಬಸವಕಲ್ಯಾಣದಲ್ಲಿ ಓಡಾಡಲು ನಳೀನ್ ಕುಮಾರ ಕಟೀಲ್ ಸೂಚಿಸಿದ್ದಾರೆ. ನಾನು, ಭಗವಂತ ಖೂಬಾ ಕೆಲಸ ಮಾಡ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಹಾಗೇ ಡಿ.5ರಂದು ಕರ್ನಾಟಕ ಬಂದ್ ವಿಚಾರದ ಬಗ್ಗೆ ಮಾತನಾಡಿದ ಅವರು,  ಮರಾಠ ನಿಗಮ ಭಾಷೆ ಆಧಾರದ ಮೇಲೆ ಮಾಡಿಲ್ಲ. ಕೆಲ ಮರಾಠಿಗಳು ಕರ್ನಾಟಕದಲ್ಲೇ ವಾಸವಿದ್ದಾರೆ. ಎಲ್ಲ ಸಮುದಾಯವನ್ನು ಒಟ್ಟಿಗೆ ಒಯ್ಯುವ ಕೆಲಸ ಮಾಡುತ್ತಿದ್ದೇವೆ. ಮರಾಠ ನಿಗಮ ವಿಚಾರದಲ್ಲಿ ತಪ್ಪು ಕಲ್ಪನೆ ಬೇಡ. ರಾಜ್ಯದ ಮರಾಠಿಗರ ಅಭಿವೃದ್ಧಿ ನಿಗಮವನ್ನು ಭಾಷೆಗೆ ಕನೆಕ್ಟ್ ಮಾಡೋದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ