ದಸರಾದಲ್ಲಿ ಶನಿವೃಕ್ಷಕ್ಕೆ ವಿಶೇಷ ಪೂಜೆ ಮಾಡೋದ್ಯಾಕೆ?

ಮಂಗಳವಾರ, 8 ಅಕ್ಟೋಬರ್ 2019 (18:23 IST)
ವಿಜಯದಶಮಿ ಅಂಗವಾಗಿ ಶಮಿವೃಕ್ಷಕ್ಕೆ ನಡೆಸಲಾದ ವಿಶೇಷ ಪೂಜೆ ಸಮಾರಂಭಕ್ಕೆ ಭಕ್ತಸಾಗರ ಅಪಾರವಾಗಿ ಹರಿದು ಬಂದಿತ್ತು.  
ಮಂಡ್ಯ ಜಿಲ್ಲೆಯ ಪುರಗ್ರಾಮದ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ  ಶಮಿವೃಕ್ಷಕ್ಕೆ ವಿಶೇಷ ನೆರವೇರಿತು.

ಶ್ರೀ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ವಿಜಯದಶಮಿಯ ಅಂಗವಾಗಿ ಗಂಗಾಪೂಜೆ, ಶಮೀ ವೃಕ್ಷಪೂಜೆ, ಶ್ರೀ ಬಸವೇಶ್ವರ, 
ಶ್ರೀ ಮಹದೇಶ್ವರ ಹಾಗೂ ಶ್ರೀ ವನದೇವತೆಯ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಶ್ರೀ ಮಹದೇಶ್ವರ ಬೆಟ್ಟ ಕ್ಷೇತ್ರವು ಶ್ರೀ ಬಸಪ್ಪಸ್ವಾಮಿ ಅವರ ನೇತೃತ್ವದಲ್ಲಿ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ.

 ಲೋಕಕಲ್ಯಾಣಕ್ಕಾಗಿ ನಡೆದ ಶಮೀವೃಕ್ಷದ ಬನ್ನಿಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರಿಗೆ ನಿಮ್ಮ ಬಾಳು ಬಂಗಾರವಾಗಲಿ ಅಂತ ಬನ್ನಿ ಎಲೆ ನೀಡಿ ಹರಿಸಲಾಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ