ನದಿಗೆ ಹಾರಿ ಜೀವಬಿಟ್ಟ ಗಂಡ ಹೆಂಡತಿ

ಶನಿವಾರ, 18 ಜನವರಿ 2020 (15:39 IST)
ಯುವಕ ಹಾಗೂ ಯುವತಿಯ ಮೃತದೇಹಗಳು ನದಿಯಲ್ಲಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿವೆ.

ಮೃತರನ್ನು ಪ್ರಕಾಶ್ ಹಾಗೂ ಭಾರತಿ ಅಂತ ಗುರ್ತಿಸಲಾಗಿದ್ದು, ಇವರು ಮೂಲತಃ ಹಾವೇರಿ ಜಿಲ್ಲೆಯವರು.

ಐದಾರು ತಿಂಗಳು ಹಿಂದೆಯಷ್ಟೇ ಪ್ರಕಾಶ್ – ಭಾರತಿ ಮದುವೆ ಆಗಿತ್ತು. ಸುಖವಾಗಿ ಜೀವನ ನಡೆಸಬೇಕಿದ್ದ ಜೋಡಿ ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

 ಕೌಟುಂಬಿಕ ಕಾರಣದಿಂದ ಮದುವೆಯಾಗಿದ್ದ ಜೋಡಿ ನದಿಗೆ ಹಾರಿದೆ ಅಂತ ಹೇಳಲಾಗುತ್ತಿದೆ. ಗುತ್ತಲ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ