ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ : ಆರಗ ಜ್ಞಾನೇಂದ್ರ

ಗುರುವಾರ, 4 ಆಗಸ್ಟ್ 2022 (15:03 IST)
ಬೆಂಗಳೂರು : ಸಚಿವನಾಗಿ ಒಂದು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.

ಕೆಲಸ ಮಾಡಿರುವ ಸಂಪೂರ್ಣ ತೃಪ್ತಿ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿ ಒಂದು ವರ್ಷ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಂದಿಗೆ ಸಚಿವನಾಗಿ ಒಂದು ವರ್ಷ ಆಗಿದೆ. ನನ್ನ ಕೆಲಸ ನನಗೆ ತೃಪ್ತಿ ತಂದಿದೆ. ಪ್ರಾಮಾಣಿಕವಾಗಿ ನಾನು ಕೆಲಸ ಮಾಡಿದ್ದೇನೆ ಎಂದರು.

ಪುನೀತ್ ರಾಜ್ ಕುಮಾರ್ ನಿಧನರಾದಾಗ ಅತ್ಯಂತ ಯಶಸ್ವಿಯಾಗಿ ಅಂತ್ಯ ಸಂಸ್ಕಾರ ಕಾರ್ಯ ಮಾಡಿದ್ದೇವೆ. ಒಂದು ವರ್ಷ ಅನೇಕ ಚಾಲೆಂಜಿಂಗ್ ಆಗಿ ಇತ್ತು.

ಹಿಜಬ್ ಪ್ರಕರಣ ನನಗೆ ಹೆಚ್ಚು ಚಾಲೆಂಜ್ ಆಗಿತ್ತು. ಇದಕ್ಕಾಗಿ ಹಗಲು ರಾತ್ರಿ ಈ ಬಗ್ಗೆ ಕೆಲಸ ಮಾಡಿದ್ದೇವೆ. ಸಿಎಂ ಸೇರಿದಂತೆ ಎಲ್ಲರ ಸಹಕಾರದಿಂದ ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ತಿಳಿಸಿದರು.

ಒಂದು ವರ್ಷ ಸಿಹಿಯೂ ಇದೆ- ಕಹಿಯು ಇದೆ. ಕೊಲೆ ರಕ್ತಪಾತ ಆದಾಗ ಸ್ವಲ್ಪ ನೋವಾಗಿದೆ. ಆದ್ರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಎಲ್ಲಾ ಸಮಸ್ಯೆಗಳು ಈ ವರ್ಷವೇ ಬಂದ ಹಾಗೆ ಬಂದಿವೆ. ಎಲ್ಲವನ್ನು ನಿಭಾಯಿಸಿದ್ದೇವೆ. ಯಾವುದನ್ನು ರಸ್ತೆ ಮೇಲೆ ಬಿಟ್ಟಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ