ಬಿಬಿಎಂಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನ ನಾಳೆ ಬಹಿರಂಗಪಡಿಸುತ್ತೇನೆ – ಬಿಎಸ್`ವೈ ಗುಡುಗು

ಬುಧವಾರ, 22 ಫೆಬ್ರವರಿ 2017 (11:22 IST)
ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್`ಗೆ ಕಪ್ಪ ನೀಡಿದ್ದ ಆರೋಪ ಮಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಇದೀಗ ಬಿಬಿಎಂಪಿಯ ಭ್ರಷ್ಟಾಚಾರ ಬಹಿರಂಗಪಡಿಸುವುದಾಗಿ ಗುಡುಗಿದ್ದಾರೆ.


ಕಲಬುರಗಿಯಲ್ಲಿ ಮಾತನಾಡಿದ ಅವರು, 3 ಸಾವಿರ ಕೋಟಿಯಷ್ಟು ಜನರ ತೆರಿಗೆ ಹಣವನ್ನ ಗುಳುಂ ಮಾಡಲಾಗಿದೆ ಎಂದು ಆರೋಪಿಸಿದ್ದು, ಈ ಭ್ರಷ್ಟಾಚಾರ ಕುರಿತಾದ ದಾಖಲೆ ಪತ್ರಗಳನ್ನ ನಾಳೆ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ