ಮಹಾದಾಯಿ ನೀರು ಕೊಡಿಸುವ ಯಡಿಯೂರಪ್ಪ ಭರವಸೆ ಏನಾಯಿತು– ಸಿದ್ದರಾಮಯ್ಯ ಪ್ರಶ್ನೆ

ಭಾನುವಾರ, 28 ಜನವರಿ 2018 (19:56 IST)
ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಉತ್ತರಕುಮಾರ ಪೌರುಷ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೊಂಬರಾಟ ಆಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕಿಡಿಕಾರಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮಹಾದಾಯಿ ನೀರು ಕೊಡಿಸುವ ಭರವಸೆ ನೀಡಿದ್ದರು. ಆದರೆ, ನೀರು ಬಂದಿವೆಯೇ ಎಂದು ಪ್ರಶ್ನಿಸಿದ್ದಾರೆ.
 
ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಂದ ಪತ್ರ ಬರೆಸಿ ನಾಟಕವಾಡಿದ್ದು ಯಡಿಯೂರಪ್ಪ ಅವರಲ್ಲವೇ ಎಂದ ಅವರು ದೊಂಬರಾಟ ಮಾಡುತ್ತಿರುವುದು ಬಿಜೆಪಿಯವರು. ರಾಹುಲ್ ಗಾಂಧಿ ಪ್ರಧಾನಮಂತ್ರಿ ಅಲ್ಲ. ದೇಶದ ಜನರು ಅಧಿಕಾರ ನೀಡಿರುವು ಮೋದಿ ಅವರಿಗೆ. ಆದ್ದರಿಂದ ಮೋದಿ ಅವರು ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ