ದಸರಾ ರಜೆಯಲ್ಲಿ ಮುರುಡೇಶ್ವರಕ್ಕೆ ತೆರಳಲು ರೆಡಿ ಆಗಿದ್ದೀರಾ: ಹಾಗಿದ್ದರೆ ಇಲ್ಲಿ ಗಮನಿಸಿ

Krishnaveni K

ಭಾನುವಾರ, 6 ಅಕ್ಟೋಬರ್ 2024 (17:59 IST)
Photo Credit: Facebook
ಮುರುಡೇಶ್ವರ: ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ನೀಡಲಾಗಿದ್ದು ಎಲ್ಲರೂ ಪ್ರವಾಸ ತೆರಳುತ್ತಿದ್ದಾರೆ. ಆದರೆ ಮುರುಡೇಶ್ವರ ಪ್ರವಾಸ ಮಾಡಲು ಹೊರಟಿದ್ದರೆ ಈ ವಿಚಾರವನ್ನು ಗಮನದಲ್ಲಿಡಿ.

ಮುರುಡೇಶ್ವರದಲ್ಲಿ ಶಿವನ ದರ್ಶನ ಜೊತೆಗೆ ಕಡಲ ಅಲೆಯ ಜೊತೆಗೆ ಬೋಟಿಂಗ್ ನಡೆಸಲು ಎಲ್ಲರೂ ಇಷ್ಟಪಡುತ್ತಾರೆ. ಇದು ಪ್ರವಾಸಿಗರ ಮೆಚ್ಚಿನ ತಾಣವೂ ಹೌದು. ಆದರೆ ಮುರುಡೇಶ್ವರಕ್ಕೆ ಪ್ರವಾಸ ಮಾಡುವವರಿಗೆ ಈಗ ಪೊಲೀಸರು ಕೆಲವೊಂದು ನಿರ್ಬಂಧ ವಿಧಿಸಿದ್ದಾರೆ.

ಇತ್ತೀಚೆಗೆ ಮುರುಡೇಶ್ವರಕ್ಕೆ ಪ್ರವಾಸ ಬಂದು ಸಮುದ್ರಕ್ಕೆ ಇಳಿದು ಎಂಜಾಯ್ ಮಾಡಲು ಹೊರಟಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಈಗ ಸ್ಥಳದಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಸಮುದ್ರದ ನೀರಿನಲ್ಲಿ ಮೋಜು ಮಸ್ತಿ ಮಾಡುವವರಿಗೆ ನಿರ್ಬಂಧ ಹೇರಲಾಗಿದೆ.

ವಿದ್ಯಾರ್ಥಿ ಮೃತಪಟ್ಟ ಹಿನ್ನಲೆಯಲ್ಲಿ ಸಮುದ್ರದ ನೀರಿಗಿಳಿಯದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಮುರುಡೇಶ್ವರ ದೇವರ ದರ್ಶನ ಮಾಡಿ ಸಮುದ್ರ ನೀರಿನಲ್ಲಿ ಎಂಜಾಯ್ ಮಾಡಲಾಗದೇ ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ