ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅಭಿಮಾನಿಯಿಂದ ಉರುಳು ಸೇವೆ

ಶುಕ್ರವಾರ, 19 ಏಪ್ರಿಲ್ 2019 (18:05 IST)
ಲೋಕಸಭೆ ಚುನಾವಣೆಯಲ್ಲಿ ತಮ್ಮ ಮೆಚ್ಚಿನ ಅಭ್ಯರ್ಥಿ ಗೆಲ್ಲಬೇಕೆಂದು ಅಭಿಮಾನಿಗಳು ವಿವಿಧ ರೀತಿಯ ಕ್ರಮಗಳಿಗೆ ಮುಂದಾಗುತ್ತಿದ್ದಾರೆ.

ಕಲಬುರಗಿಯಲ್ಲಿ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಜಾಧವ್ ಅಭಿಮಾನಿಯಿಂದ ಉರುಳು ಸೇವೆ ನಡೆದಿದೆ.

ಜಾಧವ್ ಗೆಲ್ಲಬೇಕೆಂದು ತುಳಜಾಪುರದ ಅಂಬಾಭವಾನಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಲಾಗಿದೆ. ಜಾಧವ್ ಗೆಲ್ಲಲಿ ಎಂದು ಜಗನ್ನಾಥ ಕುಂಬಾರ ಎಂಬುವರಿಂದ ಉರುಳು ಸೇವೆ ನಡೆದಿದೆ. ಹನ್ನೊಂದು ಸುತ್ತು ಉರುಳು ಸೇವೆ ಮಾಡಿದ ಜಗನ್ನಾಥ ಕುಂಬಾರ ಚಿಂಚೋಳಿಯ ಚಂದಾಪೂರದ ನಿವಾಸಿಯಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ