ರಾಜ್ಯದಲ್ಲಿ ಮತ್ತೆ ಐಟಿ ಶಾಕ್: ಯಾರು ಯಾರಿಗೆ?

ಬುಧವಾರ, 10 ಏಪ್ರಿಲ್ 2019 (16:37 IST)
ರಾಜ್ಯದಲ್ಲಿ ಮತ್ತೆ ಐಟಿ ದಾಳಿ ಮುಂದುವರಿದಿದೆ.

ಮುಂದುವರೆದ ಐಟಿ ದಾಳಿ ಹಿನ್ನೆಲೆಯಲ್ಲಿ ಇಂದು ಬೆಳಗಾವಿ  ಜಿಲ್ಲೆಯ ಚಿಕ್ಕೋಡಿ ಪಟ್ಟಣ ಹಾಗೂ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಐಟಿ ರೆಡ್ ನಡೆದಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಆಪ್ತರೆಂದು ಹೇಳಲಾಗುತ್ತಿರುವ ಗುತ್ತಿಗೆದಾರ ಪ್ರಕಾಶ್ ವಂಟಮುತ್ತೆ ಮತ್ತು ರುದ್ರಗೌಡ ಪಾಟೀಲ ಎಂಬ ಗುತ್ತಿಗೆದಾರರ ಮನೆ ಹಾಗೂ ಕಚೇರಿ ಮೆಲೆ ಐಟಿ ದಾಳಿ ನಡೆದಿದೆ.

ಐಟಿ ಅಧಿಕಾರಿಗಳು ತೀವ್ರ ಶೋಧನೆ ನಡೆಸುತ್ತಿದ್ದು, ಪ್ರಮುಖ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ