ಶಿವಸೇನೆ ಇಲ್ಲಾಂದ್ರೆ ಏಕಾಂಗಿಯಾಗಿ ಹೋರಾಡಲು ಸಿದ್ಧರಾಗಿ: ಅಮಿತ್ ಶಾ ಕರೆ

ಸೋಮವಾರ, 23 ಜುಲೈ 2018 (10:30 IST)
ಮುಂಬೈ: ಶಿವಸೆನೆ ಜತೆಗೆ ಮೈತ್ರಿ ಕಷ್ಟವಾಗಿರುವ ಹಿನ್ನಲೆಯಲ್ಲಿ ತಮ್ಮ ಪಕ್ಷದ ನಾಯಕರಿಗೆ 2019 ರ ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆಕೊಟ್ಟಿದ್ದಾರೆ.

ಶಿವಸೇನೆಯನ್ನು ನಂಬುತ್ತಾ ಕೂತರೆ ಇನ್ನು ಮಹಾರಾಷ್ಟ್ರದಲ್ಲಿ ಪ್ರಚಾರ ಕಷ್ಟ ಎಂದು ಬಿಜೆಪಿಗೆ ಈಗ ಅರಿವಾಗಿದೆ. ಅವಿಶ್ವಾಸ ಮತ ಸಂದರ್ಭದಲ್ಲಿಯೂ ಶಿವಸೇನೆ ಕೊನೆ ಕ್ಷಣದಲ್ಲಿ ಕೈ ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಅಮಿತ್ ಶಾ ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಕರೆ ಕೊಟ್ಟಿದ್ದಾರೆ.

ಶಿವಸೇನೆ ಬಂದರೆ ಸ್ವಾಗತ. ಇಲ್ಲವಾದರೆ ಏಕಾಂಗಿಯಾಗಿ ಆದರೂ ಸರಿಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುವಂತೆ ಅಮಿತ್ ಶಾ ಪಕ್ಷದ ನಾಯಕರಿಗೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ