ಆಮ್ ಆದ್ಮಿ ಪಕ್ಷದ 'ರಾಷ್ಟ್ರೀಯ ಸಂಚಾಲಕ'ರಾಗಿ ಅರವಿಂದ ಕೇಜ್ರಿವಾಲ್ ಮರುನೇಮಕ

ಭಾನುವಾರ, 12 ಸೆಪ್ಟಂಬರ್ 2021 (14:05 IST)
ನವದೆಹಲಿ : ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ದೆಹಲಿ ಸಿಂ ಅರವಿಂದ ಕೇಜ್ರಿವಾಲ್ ಮರು ನೇಮಕಗೊಂಡಿದ್ದಾರೆ. ಕಳೆದ ಎರಡು ಅವಧಿಗಳಲ್ಲೂ ಅರವಿಂದ ಕೇಜ್ರಿವಾಲ್ ಅವರೇ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಆಯ್ಕೆಯಾಗಿದ್ದರು, ಈಗ ಮೂರನೇ ಅವಧಿಗೂ ಅರವಿಂದ ಕೇಜ್ರಿವಾಲ್ ಅವರನ್ನೇ ಪಕ್ಷ ಮರುನೇಮಕ ಮಾಡಿದೆ.

ಇಂದು ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಕೇಜ್ರಿವಾಲ್ ಅವರನ್ನು ರಾಷ್ಟ್ರೀಯ ಸಚಾಲಕರಾಗಿ ಮತ್ತೊಂದು ಅವಧಿಗೆ ಮರುನೇಮಕಗೊಳಳಿಸಲಾಗಿದೆ. ಇದೇ ವೇಳೆ, ಪಕ್ಷದ ನಾಯಕರಾದ ಪಂಕಜ್ ಗುಪ್ತ ರನ್ನು ಕಾರ್ಯದರ್ಶಿಯಾಗಿ ಹಾಗೂ ವಎನ್.ಡಿ.ಗುಪ್ರಾ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಕ್ಷದ ರಾಷ್ಟ್ರೀಯ ಮಂಡಳಿಯು ಹೊಸ 34 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಕೇಜ್ರಿವಾಲ್ ಕೂಡ ಇದ್ದಾರೆ…

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ