ಬೆಂಗಳೂರು ಮೂಲದ ಸಂಗೀತಗಾರ ಮುಂಬೈನಲ್ಲಿ ಆತ್ಮಹತ್ಯೆ

ಸೋಮವಾರ, 11 ಸೆಪ್ಟಂಬರ್ 2017 (11:57 IST)
12 ಅಂತಸ್ತಿನ ಕಟ್ಟಡದಿಂದ ಹಾರಿ ಮ್ಯೂಸಿಶಿಯನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೃತ ಸಂಗೀತಗಾರನನ್ನ ಬೆಂಗಳೂರು ಮೂಲದ 29 ವರ್ಷದ ಕರಣ್ ಜೋಸೆಫ್ ಎಂದು ಗುರ್ತಿಸಲಾಗಿದೆ. ಸ್ನೇಹಿತ ರಿಶಿ ಶಾಗೆ ಕಂಪನಿಯಿಂದ ನೀಡಿದ್ದ 12ನೇ ಮಹಡಿಯ ಫ್ಲ್ಯಾಟ್`ನ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
 

ಕಳೆದೊಂದು ತಿಂಗಳಿಂದ ಸ್ನೇಹಿತನ ಜೊತೆ ವಾಸವಿದ್ದ ಕರಣ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಸ್ನೇಹಿತರ ಜೊತೆ ಕುಳಿತು ಟಿವಿ ನೋಡುತ್ತಿದ್ದ ಕರಣ್, ಕಿಟಕಿ ಬಳಿಗೆ ಹೋಗಿ ಅಲ್ಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಮಡಿದ್ದಾನೆ. ಈ ಸಂದರ್ಭ ಕರಣ್ ಪಾನಮತ್ತನಾಗಿದ್ದನೆಂದು ವರದಿಯಾಗಿದೆ.

ಮೇಲಿನಿಂದ ಜಿಗಿದ ಬಳಿಕವೂ ಕರಣ್`ನನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಬರುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಮನೆ ಬಿಟ್ಟು ತೆರಳಿದ್ದ ಕರಣ್ ಬೆಳಗಿನ ಜಾವ ಮನೆಗೆ ಬಂದಿದ್ದ. ಈ ಸಂದರ್ಭ ಬೇಸರದಲ್ಲಿದ್ದ ಎನ್ನಲಾಗಿದೆ. ಕರಣ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೊಟ್ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಕರಣ್ ಮೊಬೈಲನ್ನ ವಿಧಿ ವಿಜಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ