ಭಾರತ್ ಬಂದ್ ನಿಂದ ಗರ್ಭಿಣಿ ಪ್ರಾಣಾಪಾಯದಲ್ಲಿ!

ಶನಿವಾರ, 27 ಮಾರ್ಚ್ 2021 (09:54 IST)
ಜೈಪುರ: ಭಾರತ್ ಬಂದ್ ನಿಂದಾಗಿ ಗರ್ಭಿಣಿ ಮಹಿಳೆಯ ಜೀವ ಈಗ ಅಪಾಯದಲ್ಲಿದೆ. ಪ್ರತಿಭಟನಾಕಾರರು ಆಂಬ್ಯುಲೆನ್ಸ್ ಬಿಡದೇ ಮಹಿಳೆಯ ಪ್ರಾಣಕ್ಕೆ ಕುತ್ತು ತಂದಿದ್ದಾರೆ.


ರಾಜಸ್ಥಾನದ ಶ್ರೀಗಂಗಾನಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಥಾವಲಾ ಬೈಪಾಸ್ ನಲ್ಲಿ ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ರಸ್ತೆ ತಡೆ ಮಾಡಿದ್ದರು. ಆ ವೇಳೆ ಗರ್ಭಿಣಿ ಮಹಿಳೆಯನ್ನು ಹೊತ್ತು ಬರುತ್ತಿದ್ದ ಆಂಬ್ಯುಲೆನ್ಸ್ ಬಂತು.

ಆದರೆ ಪ್ರತಿಭಟನಾಕಾರರು ಗರ್ಭಿಣಿ ಮಹಿಳೆಯರ ಕಡೆಯವರು ಎಷ್ಟೇ ಮನವಿ ಮಾಡಿದರೂ ದಾರಿ ಬಿಡಲಿಲ್ಲ. ಆಕೆ ಸತ್ತರೆ ಸಾಯಲಿ ಎಂದು ಉಡಾಫೆ ಮಾಡಿದ್ದಾರೆ. ಇದರಿಂದಾಗಿ ಈಗ ಗರ್ಭಿಣಿ ಮಹಿಳೆ ಪ್ರಾಣಾಪಾಯದಲ್ಲಿದೆ. ಈ ಘಟನೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ