ಈ ಕಾರಣಕ್ಕೆ ಅತ್ತಿಗೆಯ ಕತ್ತುಹಿಸುಕಿ ಕೊಂದ ಮೈದುನ

ಗುರುವಾರ, 12 ನವೆಂಬರ್ 2020 (06:26 IST)
ನವದೆಹಲಿ : 26 ವರ್ಷದ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನು ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾದ ಘಟನೆ ಈಶಾನ್ಯ ದೆಹಲಿಯ ಕರವಾಲ್ ನಗರದಲ್ಲಿ ನಡೆದಿದೆ.

ರೋಹಿತ್(26) ಆರೋಪಿ. 3 ವರ್ಷಗಳ ಹಿಂದೆ ಆರೋಪಿಯ ಸಹೋದರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತ ಅತ್ತಿಗೆಯ ಜೊತೆ ವಾಸವಾಗಿದ್ದ. ಕುಟುಂಬದ ಸಮಸ್ಯೆಯಿಂದಾಗಿ ಆತನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಅತ್ತಿಗೆ ಮತ್ತೆ ಕೌಟುಬಿಕ ಸಮಸ್ಯೆ ಸೃಷ್ಟಿಸಲು ಶುರು ಮಾಡಿದ ಹಿನ್ನಲೆಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಬಳಿಕ ಡಿಸಿಪಿ ಕಚೇರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ