ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಉಪವಾಸ ಅಂತ್ಯ

ಭಾನುವಾರ, 11 ಜೂನ್ 2017 (17:33 IST)
ಮಧ್ಯಪ್ರದೇಶದ ಮಂಡ್ ಸೌರ್ ನಲ್ಲಿ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಹಿನ್ನಲೆಯಲ್ಲಿ ಶಾಂತಿ ಮರುಸ್ಥಾಪನೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಪ್ರಾರಂಭಿಸಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಪವಾಸ ಅಂತ್ಯಗೊಳಿಸಿದ್ದಾರೆ.
 
ದಸರಾ ಮೈದಾನದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದ ಉಪವಾಸಕ್ಕೆ ಅಂತ್ಯ ಹಾಡಲು ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ಚೌಹಾಣ್ ಅವರಿಗೆ ಎಳನೀರು ನೀಡಿದ್ದಾರೆ. ಏಳನೀರು ಕುಡಿದು ಚೌಹ್ವಾಣ್ ಉಪವಾಸ ಅಂತ್ಯಗೊಳಿಸಿದರು. 
 
ಸಾಲ ಮನ್ನಾ ಮತ್ತು ರೈತರ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆಗಾಗಿ ರೈತರು ಜೂನ್ 1 ರಿಂದ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕೆ ಜೂನ್ 6 ರಂದು ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಐವರು ರೈತರು ಮೃತಪಟ್ಟಿದ್ದರು. ಇದು ರೈತರ ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸಿತ್ತು. ನಂತರ ಶಾಂತಿಗೆ ಮನವಿ ಮಾಡಿ ಶಿವರಾಜ್ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. 
 

ವೆಬ್ದುನಿಯಾವನ್ನು ಓದಿ