ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯನ್ನೂ ಕರೆದೊಯ್ಯಬೇಕಿತ್ತೇ? ಹೀಗೆಂದು ಪ್ರಶ್ನಿಸಿದವರು ಯಾರು ಗೊತ್ತಾ?!
‘ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರಾಜಕೀಯ ಮಾತನಾಡುತ್ತಿಲ್ಲ. ಆದರೆ ವಿಪಕ್ಷ ಕಾಂಗ್ರೆಸ್ ಯಾಕೆ ಋಣಾತ್ಮಕ ಸುದ್ದಿ ಬಿತ್ತರಿಸುತ್ತದೆ? ಅವರಿಗೆ ಏನು ಬೇಕಾಗಿದೆ? ಅವರನ್ನೂ ಜತೆಗೇ ಕರೆಯಬೇಕಿತ್ತೇ? ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಸಂದರ್ಭ ರಾಹುಲ್ ಗಾಂಧಿಯನ್ನೂ ಸಾಕ್ಷ್ಯ ತೋರಿಸಲು ಕರೆದೊಯ್ಯಬೇಕಿತ್ತೇ?’ ಎಂದು ಪರಿಕ್ಕರ್ ಪ್ರಶ್ನಿಸಿದ್ದಾರೆ.
ಅನಾರೋಗ್ಯದಿಂದ ಗುಣಮುಖರಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಮನೋಹರ್ ಪರಿಕ್ಕರ್ ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.