ಪುರಾತನ ದ್ವಾರಕಾನಗರಿಯಲ್ಲಿದ್ದಂತೆ ಭಾಸವಾಗುತ್ತಿದೆ

geetha

ಭಾನುವಾರ, 25 ಫೆಬ್ರವರಿ 2024 (17:35 IST)
ಗುಜರಾತ್‌ : ನದಿಯಲ್ಲಿ ಮಿಂದು ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಧಾನಿ ನರೇಂದ್ರ ಮೋದಿ ಇಂದು ಪುರಾಣ ಪ್ರಸಿದ್ದ ದ್ವಾರಕಾನಗರಿಗೆ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಸಮುದ್ರದಲ್ಲಿ ಮುಳುಗಿದೆಯೆಂದು ನಂಬಲಾಗಿರುವ ದ್ವಾರಕ ನಗರದಲ್ಲಿ ಪ್ರಾರ್ಥಿಸುವುದೇ ಒಂದು ದೈವಿಕ ಅನುಭವ ಎಂದು ಹೇಳಿದ್ದಾರೆ.

ಜೊತೆಗೆ, ಆಧ್ಯಾತ್ಮಿಕ ಭವ್ಯತೆಯಿಂದ ಕೂಡಿರುವ ನಮ್ಮ ಪರಂಪರೆಯೊಂದಿಗೆ ಹಾಗೂ  ಕಾಲಾತೀತವಾದ ಭಕ್ತಿಯೊಂದಿಗೆ ಪುರಾತನ ದ್ವಾರಕೆಯಲ್ಲಿದ್ದಹಾಗೆಯೇ ಭಾಸವಾಯ್ತು ಎಂದು ಮೋದಿ ಹೇಳಿಕೊಂಡಿದ್ದಾರೆ. ಭಗವಾನ್‌ ಶ್ರೀ ಕಷ್ಣ ನಮ್ಮೆಲ್ಲರನ್ನೂ ಹರಸಲಿ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ