ಹತ್ರಾಸ್ ಸಂತ್ರಸ್ತೆ ಕುಟುಂಬಕ್ಕೆ ಗೃಹಬಂಧನ : ಸಿಎಂ ಯೋಗಿ ವಿರುದ್ಧ ಕಿಡಿ

ಶನಿವಾರ, 3 ಅಕ್ಟೋಬರ್ 2020 (16:44 IST)
ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಘಟನೆ ವಿರುದ್ಧ ದೇಶಾದ್ಯಂತ ಆಕ್ರೋಶ ಹೆಚ್ಚುತ್ತಿದೆ.


ಈ ನಡುವೆ ಮಧ್ಯರಾತ್ರಿ ಯುವತಿಯ ಶವಸಂಸ್ಕಾರವನ್ನು ಪೊಲೀಸರೇ ನಡೆಸಿದ್ದರೆ, ಇದೀಗ ಮತ್ತೊಂದು ಯಡವಟ್ಟು ನಡೆಯುತ್ತಿದೆ.

ಉತ್ತರ ಪ್ರದೇಶದ ಸರಕಾರ ಸಂತ್ರಸ್ಥೆಯ ಕುಟುಂಬದವರನ್ನು ಗೃಹಬಂಧನದಲ್ಲಿ ಇಟ್ಟಿದೆ.

ಕುಟುಂಬದವರು ಯಾರನ್ನೂ ಭೇಟಿಯಾಗದಂತೆ, ಮಾತನಾಡದಂತೆ ಮೊಬೈಲ್ ವಶಕ್ಕೆ ಪಡೆದುಕೊಂಡು ಪೊಲೀಸ್ ಸರ್ಪಗಾಲು ಹಾಕಲಾಗಿದೆ.

ಮಾಧ್ಯಮದವರನ್ನು, ರಾಜಕಾರಣಿಗಳನ್ನೂ ಗ್ರಾಮದ ಒಳಗಡೆ ಬಿಡುತ್ತಿಲ್ಲ. ಹೀಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಜನಾಕ್ರೋಶ ಎಲ್ಲೆಡೆ ಹೆಚ್ಚಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ