ಅರ್ಧದಷ್ಟು ಸಂಪತ್ತು ದಾನ ಮಾಡಲಿದ್ದಾರೆ ನಂದನ್ ನೀಲೇಕಣಿ
ಹಾಗಂತ ಸ್ವತಃ ನೀಲೇಕಣಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರಪಂಚದ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ಬೆಂಗಳೂರಿನಲ್ಲಿ ನೀಲೇಕಣಿ ದಂಪತಿಯನ್ನು ಭೇಟಿಯಾಗಿದ್ದು. ಬಿಲ್ ಗೇಟ್ಸ್ ಪ್ರೇರಣೆಯಿಂದ ನೀಲೇಕಣಿ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಭಗವದ್ಗೀತೆಯ ಸಾಲಿನಂತೆ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ನೀಲೇಕಣಿ ದಂಪತಿಯ ತೀರ್ಮಾನಕ್ಕೆ ಬಿಲ್ ಗೇಟ್ಸ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.