ಬಿಹಾರಕ್ಕೆ ಮತ್ತೆ ನಿತೀಶ್ ಸಿಎಂ: ಇಂದು ಸಭೆ ಸೇರಲಿರುವ ಎನ್ ಡಿಎ

ಭಾನುವಾರ, 15 ನವೆಂಬರ್ 2020 (11:26 IST)
ನವದೆಹಲಿ: ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೂಟ ಬಹುಮತ ಪಡೆದ ಹಿನ್ನಲೆಯಲ್ಲಿ ಸರ್ಕಾರ ರಚನೆ ಸರ್ಕಸ್ ಶುರುವಾಗಿದೆ.


ಇಂದು ಮಧ್ಯಾಹ್ನ 12.30 ಕ್ಕೆ ಸಭೆ ಸೇರಲಿರುವ ಎನ್ ಡಿಎ ನಾಯಕರು ನೂತನ ಸಿಎಂ ಆಗಿ ಮತ್ತೆ ನಿತೀಶ್ ಕುಮಾರ್ ಅವರನ್ನೇ ಮುಂದುವರಿಸುವ ನಿರ್ಧಾರ ಮಾಡಲಿದ್ದಾರೆ. ಪಾಟ್ನಾದ ನಿತೀಶ್ ನಿವಾಸದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ, ಜೆಡಿಯು, ಎಚ್ ಎಎಂ ಸೇರಿದಂತೆ ಎನ್ ಡಿಎ ಕೂಟದ ಪಕ್ಷಗಳು ಪಾಲ್ಗೊಳ್ಳಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ