ನಿರ್ಮಲಾ ಪ್ಯಾಕೇಜ್ 2 ನಲ್ಲಿ ಏನೇನಿರುತ್ತೆ?

ಗುರುವಾರ, 14 ಮೇ 2020 (09:44 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದೂ ಕೂಡಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಕೃಷಿ ವಲಯ ಇಂದು ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದೆ.


ನಿನ್ನೆಯಂತೆ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ನಿರ್ಮಲಾ ಸೀತಾರಾಮನ್ ಹೊಸ ಯೋಜನೆಗಳ ಘೋಷಣೆ ಮಾಡಲಿದ್ದಾರೆ. ಕಾರ್ಮಿಕ ಮತ್ತು ಕೃಷಿ ವಲಯಕ್ಕೆ ಇಂದಿನ ಪ್ಯಾಕೇಜ್ ನಲ್ಲಿ ಹೆಚ್ಚು ಒತ್ತು ಸಿಗಲಿದೆ.

ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಯಂತ್ರೋಪಕರಣಗಳ ಖರೀದಿಗೆ ಪ್ರೋತ್ಸಾಹ ಇತ್ಯಾದಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ