ಆಗಸ್ಟ್ 15ರಂದು 'ಬಿಜೆಪಿ ತೊಲಗಿಸಿ, ದೇಶ ಉಳಿಸಿ' ಅಭಿಯಾನಕ್ಕೆ ಚಾಲನೆ - ಮಮತಾ ಬ್ಯಾನರ್ಜಿ

ಭಾನುವಾರ, 22 ಜುಲೈ 2018 (12:46 IST)
ಕೋಲ್ಕತ್ತಾ : ದೇಶದಾದ್ಯಂತ ಜನರನ್ನು ಎಲ್ಲೆಡೆ ಥಳಿಸಲಾಗುತ್ತಿರುವುದನ್ನು ನೋಡಿದರೆ ಬಿಜೆಪಿಯವರು ಜನರಲ್ಲಿ ತಾಲಿಬಾನೀಯರನ್ನು ಸೃಷ್ಟಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ ಟಿಎಂಸಿ ನಾಯಕಿ, ಪಶ್ಚಿಮಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಗಸ್ಟ್ 15ರಂದು 'ಬಿಜೆಪಿ ತೊಲಗಿಸಿ, ದೇಶ ಉಳಿಸಿ' ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.


ಶನಿವಾರ ನಡೆದ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಂಸತ್‌ನ ಒಳಗೆ ಬಿಜೆಪಿಗೆ ವಿಶ್ವಾಸಮತವಿದೆ. ಆದರೆ, ಹೊರಗೆ ಆ ಸಂಖ್ಯೆ ಇಲ್ಲ. ಇತ್ತೀಚೆಗೆ ಬಿಜೆಪಿ ಶಕ್ತಿ ಕ್ಷೀಣಿಸುತ್ತಿದೆ ಎಂದಿದ್ದಾರೆ. ಹಾಗೇ 2019ರ ಲೋಕಸಭಾ ಚುನಾವಣೆ ಎನ್‌ಡಿಎಗೆ ಭಾರೀ ಹೊಡೆತ ನೀಡಲಿದ್ದು ಬಂಗಾಳವು ಇದಕ್ಕೆ ಮುನ್ನುಡಿ ಬರೆಯಲಿದೆ . ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಪಶ್ಚಿಮಬಂಗಾಲದ ಎಲ್ಲಾ 42 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಜನರನ್ನು ಎಲ್ಲೆಡೆ ಥಳಿಸಲಾಗುತ್ತಿರುವುದನ್ನು ನೋಡಿದರೆ  ಬಿಜೆಪಿಯವರು ಜನರಲ್ಲಿ ತಾಲಿಬಾನೀಯರನ್ನು ಸೃಷ್ಟಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನಲ್ಲಿರುವ ಕೆಲವು ಉತ್ತಮ ವ್ಯಕ್ತಿಗಳನ್ನು ನಾನು ಗೌರವಿಸುತ್ತೇನೆ. ಆದರೆ ಇತರರು ಕೊಳಕು ಆಟವಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದೇ ವೇಳೆ, ಬಿಜೆಪಿ ಮುಖಂಡ ಚಂದನ್‌ ಮಿತ್ರಾ, ಕಾಂಗ್ರೆಸ್‌ನ ನಾಲ್ವರು ಶಾಸಕರು ಸಿಎಂ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಯಾದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ