ಶಬರಿಮಲೆಯಲ್ಲಿ ಕಳ್ಳತನವಾದ ಚಿನ್ನ ಪತ್ತೆಯಾದ ಬಗ್ಗೆ ವಿಪಕ್ಷ ನಾಯಕ ಸತೀಶನ್ ಸ್ಫೋಟಕ ಹೇಳಿಕೆ

Sampriya

ಶನಿವಾರ, 25 ಅಕ್ಟೋಬರ್ 2025 (17:45 IST)
ಕೊಚ್ಚಿ:  ವಿವಾದ ಸೃಷ್ಟಿಸಿರುವ ಶಬರಿಮಲೆ ದೇವಸ್ಥಾನದ ಚಿನ್ನ ಕಳುವು ಸಂಬಂಧ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಪ್ರತಿಕ್ರಿಯಿಸಿ, ಕಳುವಾಗಿದ್ದ ಚಿನ್ನವು ಕೋಟ್ಯಧಿಪತಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.

ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟಿನ ಚಿನ್ನದ ಲೇಪನ ಕೆಲಸಕ್ಕಾಗಿ ಆರ್ಥಿಕ ನೆರವು ಒದಗಿಸಿದ್ದ ಕರ್ನಾಟಕ ಮೂಲದ ಉದ್ಯಮಿ ಗೋವರ್ಧನ್ ಅವರ ಒಡೆತನದ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಲವಾರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ ಎಂದು ಸತೀಶನ್ ಉಲ್ಲೇಖ ಮಾಡಿದ್ದಾರೆ.

ಎಸ್‌ಐಟಿ ಬಂಧನದ ನಂತರ, ಈ ಯೋಜನೆಯನ್ನು ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಅಧಿಕೃತವಾಗಿ ಪ್ರಾಯೋಜಿಸಿದ್ದಾರೆ.

‘ಕದ್ದ ಚಿನ್ನವನ್ನು ಕೋಟ್ಯಧಿಪತಿಗೆ ಮಾರಾಟ ಮಾಡಲಾಗಿದೆ ಎಂದು ನಾವು (ವಿರೋಧ ಪಕ್ಷ ಕಾಂಗ್ರೆಸ್) ಹೇಳಿದ್ದು ಸರಿಯಾಗಿದೆ. ಈ ವಿಷಯದಲ್ಲಿ ವಿರೋಧ ಪಕ್ಷದ ಎಲ್ಲಾ ಆರೋಪಗಳೂ ನಿಜವಾಗಿವೆ’ ಎಂದಿದ್ದಾರೆ.

ಎಸ್‌ಐಟಿ ನಡೆಸಿದ ತನಿಖೆಯೂ ಪ್ರತಿಪಕ್ಷಗಳ ಹೇಳಿಕೆಗಳು ಸರಿ ಎಂದು ಸಾಬೀತುಪಡಿಸಿದ್ದು, ಅದಕ್ಕಾಗಿಯೇ ಪ್ರಸ್ತುತ ದೇವಸ್ವಂ ಸಚಿವ ವಿ.ಎನ್. ವಾಸವನ್ ರಾಜೀನಾಮೆ ನೀಡಬೇಕು ಮತ್ತು ಟಿಡಿಬಿಯನ್ನು ವಿಸರ್ಜಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಸತೀಶನ್ ಹೇಳಿದರು. 

ಅಯ್ಯಪ್ಪ ದೇಗುಲದಿಂದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಟ್ಟಿ ಮತ್ತು ದೇವಸ್ವಂನ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿ ಬಾಬು ಅವರನ್ನು ಎಸ್‌ಐಟಿ ಬಂಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ