ಮಗಳ ಸಾವಿಗೆ ನ್ಯಾಯ ದೊರಕಿಸದ ಪೊಲೀಸರು: ಪೋಷಕರು ಮಾಡಿದ್ದೇನು ಗೊತ್ತಾ?

ಭಾನುವಾರ, 11 ಅಕ್ಟೋಬರ್ 2020 (10:46 IST)
ನವದೆಹಲಿ: ವಿವಾಹಿತ ಮಗಳು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಿ, ಆರೋಪಿ ಅಳಿಯನಿಗೆ ಶಿಕ್ಷೆ ಕೊಡಿಸದ ಬೇಸರದಲ್ಲಿ ತಂದೆ-ತಾಯಿ ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಅಮೃತಸರದಲ್ಲಿ ನಡೆದಿದೆ.


2015 ರಲ್ಲಿ ಮಗಳನ್ನು ಅಳಿಯನೇ ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ್ದ. ಆದರೆ ಆರೋಪಿಗಳ ಬಗ್ಗೆ ಸರಿಯಾಗಿ ವಿಚಾರಣೆ ನಡೆಸಿರಲಿಲ್ಲ. ಇದರಿಂದ ಬೇಸರಗೊಂಡ ದಂಪತಿ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಪೊಲೀಸರ ವರ್ತನೆಯೇ ಕಾರಣ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ