ಪತ್ನಿಯನ್ನು ಕೊಂದು ಮೃತ ದೇಹವನ್ನು ತುಂಡು ತುಂಡಾಗಿ ಕತ್ತಿರಿಸಿ ಕಸದ ತೊಟ್ಟಿಗೆ ಎಸೆದ ನಿರ್ಮಾಪಕ

ಶನಿವಾರ, 9 ಫೆಬ್ರವರಿ 2019 (09:42 IST)
ಚೆನ್ನೈ : ಕಿರುಚಿತ್ರ ನಿರ್ದೇಶಕ, ನಿರ್ಮಾಪಕನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಮೃತ ದೇಹವನ್ನು ತುಂಡು ತುಂಡು ಮಾಡಿ ಕಸದ ತೊಟ್ಟಿಗೆ ಎಸೆದ ಘಟನೆ ಚೆನ್ನೈನಲ್ಲಿ ನಡೆದಿದೆ.


ಬಾಲಕೃಷ್ಣ (51) ಬಂಧಿತ ನಿರ್ದೇಶಕ, ನಿರ್ಮಾಪಕ. ಸಂಧ್ಯಾ (35) ಕೊಲೆಯಾದ ಪತ್ನಿ. ಆರೋಪಿ ಬಾಲಕೃಷ್ಣ ಸಂಧ್ಯಾಳನ್ನು ಕೊಲೆ ಮಾಡಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಪ್ರತ್ಯೇಕ ಪ್ಲಾಸ್ಟಿಕ್ ಬ್ಯಾಗ್‍ ಗಳಿಗೆ ತುಂಬಿಸಿ ಬಳಿಕ ಅದನ್ನು ಯಾರಿಗೂ ತಿಳಿಯದಂತೆ ನಗರದ ಕಸದ ಬುಟ್ಟಿಗಳಲ್ಲಿ ಎಸೆದು ಪರಾರಿಯಾಗಿದ್ದಾನೆ.


ಇತ್ತ ಸಂಧ್ಯಾ ನಾಪತ್ತೆಯಾಗಿರುವ ಕುರಿತು ಪೋಷಕರು ಚೆನ್ನೈ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಕಸದಬುಟ್ಟಿಯಲ್ಲಿ ಮೃತ ದೇಹದ ಅಂಗಾಂಗಗಳು ಸಿಕ್ಕಿವೆ. ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಟ್ಯಾಟೂ ಇರುವುದು ಕಂಡು ಬಂದಿದೆ. ಮಗಳ ದೇಹದ ಮೇಲೆ ಟ್ಯಾಟೂ ಗುರುತು ಇರುವುದು ಆಕೆಯ ಪೋಷಕರು ತಿಳಿಸಿದ ಕಾರಣ ಮೃತದೇಹ ಸಂಧ್ಯಾಳದ್ದೇ ಎನ್ನುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಪತಿ  ಬಾಲಕೃಷ್ಣನನ್ನು ಬಂಧಿಸಿ ವಿಚಾರಣೆ ನಡೆದಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ