ವಿಶ್ವಾಸ ಮತ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್

ಬುಧವಾರ, 24 ಜುಲೈ 2019 (09:36 IST)
ನವದೆಹಲಿ: ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪತನದ ಬಗ್ಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಇದು ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನರ ಸೋಲು ಎಂದಿದ್ದಾರೆ.


ವಿಶ್ವಾಸಮತದಲ್ಲಿ ಸಿಎಂ ಕುಮಾರಸ್ವಾಮಿಗೆ ಸೋಲಾಗುತ್ತಿದ್ದಂತೇ ಟ್ವೀಟ್ ಮಾಡಿದ ರಾಹುಲ್ ಗಾಂಧಿ ‘ಅಧಿಕಾರ ದಾಹಿಗಳ ದುರಾಸೆಯಿಂದಾಗಿ ವಿಶ್ವಾಸಮತ ಸೋಲಾಗಿದೆ. ಆದರೆ ಅಂತಿಮವಾಗಿ ಇದು ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನತೆಯ ಸೋಲು’ ಎಂದು ದೂರಿದ್ದಾರೆ.

ಮೊದಲ ದಿನದಿಂದಲೂ ಅಧಿಕಾರ ದಾಹಿಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಮುರಿಯಲು ನೋಡುತ್ತಿದ್ದವು. ಅವರಿಗೆ ಒಳಗೆ ಮತ್ತು ಹೊರಗೆ ಅಧಿಕಾರ ದಾಹಿಗಳ ಟಾರ್ಗೆಟ್ ಆಗಿದ್ದರು. ಕೊನೆಗೂ ಇವರ ದುರಾಸೆಯೇ ಗೆದ್ದಿತು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ