ನವದೆಹಲಿ: ಯುಪಿಎ ಕಾಲದಲ್ಲಿ ಆರು ಬಾರಿ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಲಾಗಿತ್ತು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಮೋದಿ ಸರ್ಕಾರ ಪಾಕಿಸ್ತಾನದ ಉಗ್ರ ಪೋಷಣೆ ಬಗ್ಗೆ ಜಗತ್ತಿಗೇ ತಿಳಿಸಲು ಸರ್ವಪಕ್ಷ ನಿಯೋಗವನ್ನು ವಿವಿಧ ದೇಶಕ್ಕೆ ಕಳುಹಿಸಿಕೊಟ್ಟಿದೆ. ಈ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮುಖ್ಯಸ್ಥ. ಶಶಿ ತರೂರ್ ಪಾಕಿಸ್ತಾನದ ವಿರುದ್ಧ 2016 ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುರ್ಜೇವಾಲ, ಶಶಿ ತರೂರ್ ಒಬ್ಬ ಅನುಭವಿ ಮತ್ತು ಅನೇಕ ವಿಚಾರಗಳನ್ನು ತಿಳಿದುಕೊಂಡ ಸಂಸದ. ಅವರಿಗೆ ಒಂದು ತಿದ್ದುಪಡಿ ಮಾಡಲು ಬಯಸುತ್ತೇನೆ. ಯುಪಿಎ ಕಾಲಾವಧಿಯಲ್ಲೂ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸುತ್ತಲೇ ಇದ್ದೆವು. ಯುಪಿಎ ಕಾಲಾವಧಿಯಲ್ಲಿ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದಿದ್ದಾರೆ.
ಅವರ ಹೇಳಿಕೆ ಬಿಜೆಪಿ ತಿರುಗೇಟು ನೀಡಿದೆ. ಸುರ್ಜೇವಾಲ ಹೇಳಿಕೆ ದೊಡ್ಡ ಸುಳ್ಳು ಎಂದು ಬಿಜೆಪಿ ಯುಪಿಎ ಅವಧಿಯಲ್ಲಿ ದೇಶದ ಭದ್ರತೆಯೇ ಅಪಾಯದಲ್ಲಿತ್ತು. ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದೆ.