ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರೈತರ ಪ್ರತಿಭಟನಾ ಮೆರವಣಿಗೆ ‘ಚಾಯ್ ಕೀ ಚರ್ಚಾ’ ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ನರೇಂದ್ರ ಮೋದಿಯವರ ಜೊತೆ ಪದವಿ ವ್ಯಾಸಂಗ ಮಾಡಿದವರು ಅಥವಾ ಅವರಿಂದ ಚಹಾ ಖರೀದಿಸಿ ಕುಡಿದವರು ಯಾರಾದರು ಇದ್ದರೆ ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದರು.
ಅವರು ಚಹಾ ಮಾರಿರುವುದರಲ್ಲಿ ಮತ್ತು ಪದವಿ ಮುಗಿಸುವುದರಲ್ಲಿ ಅನುಮಾನ ವ್ಯಕ್ತ ಪಡಿಸಿರುವ ಸಿಂಗ್, ಈ ಹಿಂದೆ ಸ್ವತಃ ನರೇಂದ್ರ ಮೋದಿಯವರೇ ತಾವು ಮೆಟ್ರಿಕುಲೇಶನ್ ಮುಗಿಸಿದ್ದೇನೆ ಎಂದಿದ್ದರು. ಆದರೆ ಈಗ ತಾವು ಪದವೀಧರರು ಎನ್ನುತ್ತಿದ್ದಾರೆ. ಹಾಗಾಗಿ ಅವರಿಂದ ಚಹ ಕೊಂಡುಕೊಂಡವರು ಅಥವಾ ಪದವಿಯಲ್ಲಿ ಅವರ ಸಹಪಾಠಿಗಳಾಗಿದ್ದವರು ಯಾರಾದರೂ ಇದ್ದರೆ ಮುಂದೆ ಬನ್ನಿ ಎಂದು ಪ್ರಧಾನಿಯವರಿಗೆ ಟಾಂಗ್ ನೀಡಿದ್ದಾರೆ.