ನಿರ್ಜನ ಪ್ರದೇಶದಲ್ಲಿ ಡ್ರೈವಿಂಗ್ ಟೆಸ್ಟ್ ಎಂದು ಕರೆದೊಯ್ದು ನೀಚ ಕೃತ್ಯ

ಶನಿವಾರ, 3 ಸೆಪ್ಟಂಬರ್ 2022 (17:26 IST)
ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೋಟಾರು ವೆಹಿಕಲ್​ ಇನ್ಸ್​ಪೆಕ್ಟರ್​ ಒಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ 
ಕುಂದಾರಾ ಮೂಲದ ವಿನೋದ್​, ಪಠಾಣಪುರಂನ ಆರ್​ಟಿಒ ಕಚೇರಿಯ ಕೆಲಸ ನಿರ್ವಹಿಸುತ್ತಿದ್ದರು. ಕೇರಳ ಹೈಕೋರ್ಟ್​ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಳಿಕ ಒಂದು ವಾರಗಳ ಕಾಲ ತಲೆಮರೆಸಿಕೊಂಡಿದ್ದ ವಿನೋದ್​, ಇದೀಗ ಪುನಲೂರ್​ ಡಿವೈಎಸ್​ಪಿ ಮುಂದೆ ಶರಣಾಗಿದ್ದಾರೆ.
ಜುಲೈ 19ರಂದು ನಡೆಯಿತು. ಡ್ರೈವಿಂಗ್​​ ಟೆಸ್ಟ್​ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರಿನ ಒಳಗಡೆಯೇ ಮಹಿಳೆಯ ಮೇಲೆ ವಿನೋದ್​ ಅನುಚಿತವಾಗಿ ವರ್ತಿಸಿದ್ದರು. ಘಟನೆ ಸಂಬಂಧ ಪಠಾಣಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲೇ ವಿನೋದ್​ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ