ವಾಶ್ ಔಟ್ ಆಗುತ್ತಾ ಚಳಿಗಾಲದ ಅಧಿವೇಶನ

ಬುಧವಾರ, 14 ಡಿಸೆಂಬರ್ 2016 (18:46 IST)
ಇಂದು ಕೂಡ ಲೋಕಸಭಾ ಕಲಾಪ ಕೋಲಾಹಲಕ್ಕೆ ಆಹುತಿಯಾಗಿದ್ದು ಚಳಿಗಾಲದ ಅಧಿವೇಶನ ಕೂಡ ಸಂಪೂರ್ಣವಾಗಿ ವಾಶ್ ಓಟ್ ಆಗುವ ಭಯ ಪ್ರಾರಂಭವಾಗಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ, ಕಿರಣ್ ರಿಜಿಜು ವಿವಾದ ಮತ್ತು ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನಡೆಸಿದ ಗಲಾಟೆಗೆ ಪ್ರತಿಯಾಗಿ ಬಿಜೆಪಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣವನ್ನು ಎತ್ತಿಕೊಂಡಿತು. 
ಕಿರಣ್ ರಿಜಿಜು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಕೋಲಾಹಲದ ಬಳಿಕ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು. 
 
2 ಗಂಟೆಗೆ ಮತ್ತೆ ಸದನ ಪ್ರಾರಂಭವಾದಾಗ ಡಿಸ್ಎಬಿಲಿಟಿ ಮಸೂದೆಯನ್ನು ಮಂಡಿಸಲಾಯಿತು. ಬಳಿಕ ಸಹ ಕಿರಣ್ ರಿಜಿಜು ವಿವಾದಕ್ಕೆ ಸಂಬಂಧಿಸಿದಂತೆ ಕೋಲಾಹಲ ಮುಂದುವರೆದಿದ್ದುದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯ್ತು
 
ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉಪಸ್ಥಿತರಿದ್ದರು.
 

ವೆಬ್ದುನಿಯಾವನ್ನು ಓದಿ