ಖರೀದಿಸಿದ ಪತ್ನಿಯನ್ನು ಕೊಂದು ಶವವನ್ನು ಕಾಡಲ್ಲಿ ಎಸೆದ ಪತಿ!

ಗುರುವಾರ, 10 ಆಗಸ್ಟ್ 2023 (12:31 IST)
ನವದೆಹಲಿ : ವ್ಯಕ್ತಿಯೊಬ್ಬ ಮಹಿಳೆಯನ್ನು 70 ಸಾವಿರ ರೂ.ಗೆ ಖರೀದಿ ಮಾಡಿ, ಆಕೆಯನ್ನು ಮದುವೆಯಾದ ಬಳಿಕ ಆಕೆಯ ವರ್ತನೆಗೆ ರೋಸಿಹೋಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
 
ಕೃತ್ಯದ ಬಳಿಕ ವ್ಯಕ್ತಿ ಪತ್ನಿಯ ಶವವನ್ನು ಫತೇಪುರ್ ಬೇರಿಯ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಧರಂವೀರ್ ಹಾಗೂ ಕೊಲೆಗೆ ಸಹಾಯ ಮಾಡಿದ ಅರುಣ್ ಹಾಗೂ ಸತ್ಯವಾನ್ನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಫತೇಪುರ್ ಬೇರಿಯ ಝೀಲ್ ಖುರ್ದ್ ಗಡಿಯ ಬಳಿಯ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ತಲುಪಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ತನಿಖೆ ವೇಳೆ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಶನಿವಾರ ನಸುಕಿನ ಸಮಯ ಸುಮಾರು 1:40ರ ವೇಳೆಗೆ ಅನುಮಾನಾಸ್ಪದವಾಗಿ ಆಟೋ ರಿಕ್ಷಾ ಓಡಾಡಿರುವುದು ಕಂಡುಬಂದಿತ್ತು. ಆಟೋ ರಿಕ್ಷಾದ ಮಾರ್ಗವನ್ನು ಟ್ರ್ಯಾಕ್ ಮಾಡಿ, ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿತ್ತು. ಬಳಿಕ ಆಟೋ ಚಾಲಕ ಛತ್ತರ್ಪುರ್ ನಿವಾಸಿ ಅರುಣ್ನನ್ನು ಗಡಾಯಿಪುರ ಬ್ಯಾಂಡ್ ರಸ್ತೆ ಬಳಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮೃತ ಮಹಿಳೆಯನ್ನು ಧರ್ಮವೀರ್ ಪತ್ನಿ ಸ್ವೀಟಿ ಎಂದು ಅರುಣ್ ತಿಳಿಸಿದ್ದಾನೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ