ದೀಪಾವಳಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಕೊಲೆ

ಶುಕ್ರವಾರ, 9 ನವೆಂಬರ್ 2018 (09:49 IST)
ನವದೆಹಲಿ: ದೀಪಾವಳಿ ಹಬ್ಬಕ್ಕೆ ತನ್ನ ಸ್ಕೂಟರ್ ನಲ್ಲಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ನೆರೆ ಮನೆಯವನನ್ನೇ ಯುವಕನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಯೋಗೇಶ್ ಎಂಬಾತ ಕೊಲೆ ಆರೋಪಿ. ಆತ ತನ್ನ ನೆರೆ ಮನೆಯ ಸ್ನೇಹಿತ 19 ವರ್ಷದ ದೀಪಕ್ ಎಂಬಾತನನ್ನು ಕೊಲೆ ಮಾಡಿದ್ದಾನೆ.

ದೀಪಕ್ ಬಳಿ ಯೋಗೇಶ್  ಸ್ಕೂಟರ್ ನಲ್ಲಿ ಬಟ್ಟೆ ಶಾಪಿಂಗ್ ಕರೆದೊಯ್ಯಲು ಹೇಳಿದಾಗ ಆತ ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ಸಂದರ್ಭದಲ್ಲಿ ಇಬ್ಬರೂ ಯುವಕರ ಪೋಷಕರು ನಡುವೆ ಬಂದು ಜಗಳ ಬಿಡಿಸಿದ್ದಾರೆ. ಅಲ್ಲದೆ ಯೋಗೇಶ್ ಪೋಷಕರು ಆತನಿಗೆ ಸಾರ್ವಜನಿಕವಾಗಿ ಹೊಡೆದಿದ್ದಾರೆ.

ಇದರಿಂದ ಅವಮಾನಿತನಾಗಿದ್ದ ಯೋಗೇಶ್ ದೀಪಕ್ ನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಯೋಗೇಶ್ ನನ್ನು ಬಂಧಿಸಿದ್ದು, ಕೊಲೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ