ರೌಡಿಶೀಟರ್ ನ ಕೊಲೆ ಮಾಡಿ ಹೃದಯ ಕಿತ್ತೊಯ್ದ ಹಂತಕರು

ಶುಕ್ರವಾರ, 9 ನವೆಂಬರ್ 2018 (07:21 IST)
ಆಂಧ್ರಪ್ರದೇಶ : ರೌಡಿಶೀಟರ್ ನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ಆತನ  ಹೃದಯವನ್ನು ತೆಗೆದುಕೊಂಡು ಹೋದ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.


ನಗರದ ಸಾಯಿಬಾಬಾಗಿರಿಯ ನಿವಾಸಿ ಚೆನ್ನಯ್ಯನನ್ನು ತುಂಗಾಭದ್ರ ನದಿಯೊಡ್ಡು ಮೇಲೆ ಅಪರಿಚಿತರು ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಹಂತಕರು ಆತನ ದೇಹದಿಂದ ಹೃದಯವನ್ನು ಕಿತ್ತು ಕೊಂಡೊಯ್ದಿದ್ದಾರೆ.


ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಕರ್ನೂಲ್​ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ