ಧೋನಿ ಕ್ರಿಕೆಟ್ ನಿವೃತ್ತಿ - ಹೊಸ ಬಾಂಬ್ ಸಿಡಿಸಿದ ಸೌರವ್ ಗಂಗೂಲಿ

ಬುಧವಾರ, 23 ಅಕ್ಟೋಬರ್ 2019 (18:34 IST)

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ಆಟಗಾರ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿ ಕುರಿತು ಬಿಸಿಸಿಐ ನೂತನ ಅಧ್ಯಕ್ಷ ಹೊಸ ಬಾಂಬ್ ಸಿಡಿಸಿದ್ದಾರೆ.


ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಇದೇ ಮೊದಲ ಬಾರಿಗೆ ಧೋನಿಯ ಕ್ರಿಕೆಟ್ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಕ್ರಿಕೆಟ್ ನಿಂದ ನಿವೃತ್ತಿ ಆಗೋದನ್ನು ಧೋನಿಯೇ ಹೇಳಬೇಕು. ಆದರೆ ಚಾಂಪಿಯನ್ ಗಳು ಬೇಗ ನಿವೃತ್ತಿ ಆಗಬಾರದು ಅಂತ ಗಂಗೂಲಿ ಹೇಳಿದ್ದಾರೆ.

ಧೋನಿ ಅನೇಕ ದಾಖಲೆಗಳಿಗೆ, ಗೆಲುವಿಗೆ ಕಾರಣರಾಗಿದ್ದಾರೆ. ಅವರ ಆಟವನ್ನು ವಿಶ್ವದ ಕ್ರಿಕೆಟ್ ಪ್ರೇಮಿಗಳು ಇನ್ನೂ ಹೆಚ್ಚು ಕಾಲ ನೋಡುವುದಕ್ಕೆ ಇಷ್ಟ ಪಡುತ್ತಾರೆ ಅಂತ ಹೇಳಿದ್ದಾರೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ