ಜೊತೆ ಜೊತೆಯಲಿ ಧಾರವಾಹಿ ವಿವಾದದ ಬಗ್ಗೆ ಕಲಾವಿದರು ಏನಂತಿದ್ದಾರೆ?

ಸೋಮವಾರ, 22 ಆಗಸ್ಟ್ 2022 (09:40 IST)
ಬೆಂಗಳೂರು: ಧಾರವಾಹಿಗಳಲ್ಲಿ ಮನಸ್ತಾಪಗಳು, ಪಾತ್ರವರ್ಗ ಅರ್ಧದಲ್ಲೇ ಬದಲಾಗುವುದು ಎಲ್ಲಾ ಹೊಸತೇನಲ್ಲ. ಆದರೆ ಜೊತೆ ಜೊತೆಯಲಿ ಧಾರವಾಹಿ ವಿವಾದ ಬಹಿರಂಗವಾಗಿದೆ.

ಆರ್ಯವರ್ಧನ್ ಪಾತ್ರದಲ್ಲಿ ನಟ ಅನಿರುದ್ಧ್ ಹೊರತಾಗಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲೂ ಅಭಿಮಾನಿಗಳಿಗೆ ಸಾಧ‍್ಯವಾಗುತತಿಲ್ಲ. ಧಾರವಾಹಿಯಲ್ಲಿ ನಟಿಸುತ್ತಿರುವ ಇತರೆ ಕಲಾವಿದರು ನಿಮ್ಮ ಜೊತೆಗಿದ್ದೇವೆ ಸರ್ ಎಂದು ನನಗೆ ಬೆಂಬಲ ನೀಡಿದ್ದಾರೆ ಎಂದು ಅನಿರುದ್ಧ್ ಹೇಳಿಕೊಂಡಿದ್ದರು.

ನಟಿ ಮೇಘಾ ಶೆಟ್ಟಿ ಮಾಧ‍್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎನ್ನುವ ನಂಬಿಕೆಯಿದೆ ಎಂದಿದ್ದಾರೆ. ಇನ್ನು, ಧಾರವಾಹಿಯಲ್ಲಿ ಪೋಷಕ ನಟಿ ಪಾತ್ರ ಮಾಡುತ್ತಿದ್ದ ಮೀರಾ ಹೆಗ್ಡೆ ಅಲಿಯಾಸ್ ಮಾನಸಾ ಮನೋಹರ್ ಕೂಡಾ ಇದೇ ಮಾತನ್ನು ಹೇಳಿದ್ದಾರೆ. ಸದ್ಯಕ್ಕೆ ನಮಗೆ ಏನೂ ತೋಚುತ್ತಿಲ್ಲ. ಆದರೆ ಮತ್ತೆ ಎಲ್ಲವೂ ಮೊದಲಿನಂತಾಗುತ್ತದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

ಇದೇ ವಿಚಾರವಾಗಿ ಕಲಾವಿದರೊಬ್ಬರು ಮಾತನಾಡಿದ್ದು, ಯಾವುದೇ ಧಾರವಾಹಿಗಳಲ್ಲಿ ಇಂತಹ ಮನಸ್ತಾಪಗಳು ಸಹಜ. ಅದೆಲ್ಲವೂ ಮೂರು-ನಾಲ್ಕು ದಿನ ಅಷ್ಟೇ. ನೀವೇ ನೋಡ್ತಾ ಇರಿ, ಒಂದು ವಾರ ಕಳೆದ ಮೇಲೆ ಮತ್ತೆ ಎಲ್ಲವೂ ಮೊದಲಿನಂತಾಗುತ್ತದೆ. ಅವರೇ ಮತ್ತೆ ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗಾದರೂ ಪರಿಸ್ಥಿತಿ ತಿಳಿಯಾಗಬಹುದು ಎಂಬ ವಿಶ್ವಾಸವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ