ಶೋಧ

ಸೃಷ್ಟಿಯ ಮೂಲ
ಅರಿಯ ಬಯಸಿ
ಸುತ್ತೆಲ್ಲ ಸುಳಿದು
ಜೀವನದ ತಳಕ್ಕೆ

ಇಳಿದು ಪರಡಿದೆ
ಅನಾಥ ಪ್ರಜ್ಞೆ
ತಲೆಯೆತ್ತಿ ಬೆದರಿಸಿದಾಗ
ಅಳಬೇಕು ಅನಿಸಿತು.

ನದೀ ಮೂಲ
ಋಷಿ ಮೂಲ
ಇನ್ನೂ ಏನೇನೊ ಮೂಲ
ಹುಡುಕಬಾರದಂತೆ

ಆದರೂ ಅಮವಾಸ್ಯೆಯ
ರಾತ್ರಿ ಕಪ್ಪು ಕತ್ತಲೆ
ಬೆಳಕ ಹುಡುಕುವ
ನನ್ನ ಯತ್ನ ವಿಫಲವಾದಾಗ
ಸೋತೆ ಅನಿಸಿತು.

- ಾ| ಶ್ರೀಕೃಷ್ಣ ಭಟ್ ಅರ್ತಿಕಜೆ

ವೆಬ್ದುನಿಯಾವನ್ನು ಓದಿ