ದೀಪದ ಬತ್ತಿ ಸುಟ್ಟು ಕರಕಲಾಗಿ ಹೋದರೆ ಏನರ್ಥ ಗೊತ್ತಾ?

ಗುರುವಾರ, 14 ಫೆಬ್ರವರಿ 2019 (16:52 IST)
ಬೆಂಗಳೂರು : ಪ್ರತಿದಿನ ದೇವರಿಗೆ ದೀಪ ಬೆಳಗುತ್ತೇವೆ. ಆದರೆ ದೇವರಿಗೆ ಹಚ್ಚಿದ ಈ ದೀಪವನ್ನು ಸದಾ ನೋಡುತ್ತಿರಬೇಕು. ಯಾಕೆಂದರೆ ಆ ದೀಪದ ಬತ್ತಿಯೇನಾದರೂ ಸುಟ್ಟು ಹೋದರೆ ಅದು ಅನಾಹುತದ ಸಂಕೇತ ಎನ್ನಲಾಗಿದೆ.


ಹೌದು. ಪ್ರತಿದಿನ ದೇವರಿಗೆ ಬೆಳಗುವ ದೀಪದ ಬತ್ತಿ ಸುಟ್ಟು ಕರಕಲಾಗಿ ಬೂದಿಯಾಗಿ ಬಿಟ್ಟಿದೆ ಅಂದರೆ ಆ ಮನೆಯಲ್ಲಿ ಆಪತ್ತು ಕಾದಿದೆ ಎಂದರ್ಥ. ನಿಮ್ಮ ಜೀವನವು ಬೂದಿಯಾಗಿ ಬಿಡುತ್ತೆ ಎಂಬುದರ ಸಂಕೇತ ಅದಾಗಿದೆ. ನಿಮ್ಮ ಧನ ನಷ್ಟವಾಗುತ್ತದೆ, ನಿಮ್ಮ ಪತಿಯ ಆಯುಷ್ಯ ಕ್ಷೀಣವಾಗುತ್ತಿದೆ ಎಂಬುದು ಅದರ ಸಂಕೇತವಾಗಿದೆ.


ಆದ್ದರಿಂದ ದೀಪದಲ್ಲಿ ಬತ್ತಿ ಸುಟ್ಟುಕರಕಲಾಗುವ ಹಾಗೇ ಎಣ್ಣೆ ಹಾಕಬಾರದು. ಸದಾ ಅದನ್ನು ನೋಡುತ್ತಿರಬೇಕು ಎಂದು ಪಂಡಿತರು ಹೇಳುತ್ತಾರೆ.     


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ