ಗಣೇಶ ಚತುರ್ಥಿಯಂದು ತಪ್ಪದೇ ಈ 2 ನೈವೇದ್ಯವನ್ನು ಇಟ್ಟರೆ ಪುಣ್ಯ ಫಲ ಲಭಿಸುತ್ತದೆಯಂತೆ

ಶನಿವಾರ, 22 ಆಗಸ್ಟ್ 2020 (08:06 IST)
ಬೆಂಗಳೂರು : ಇಂದು ಗಣೇಶ ಚತುರ್ಥಿ ಇರುವ ಪ್ರಯುಕ್ತ ಗಣೇಶನ ಮೂರ್ತಿ ಇಟ್ಟು ಎಲ್ಲರೂ ಪೂಜೆ ಮಾಡುತ್ತಾರೆ. ಆ ವೇಳೆ ತಪ್ಪದೇ ಈ 2 ನೈವೇದ್ಯವನ್ನು ಇಟ್ಟರೆ ಜನ್ಮ ಜನ್ಮದ ಪಾಪ ಕಳೆದು ಪುಣ್ಯ ಲಭಿಸುತ್ತದೆ.

ಇಂದು ಗಣೇಶನ ಪೂಜೆ ಮಾಡುವಾಗ ನಿಷ್ಠೆಯಿಂದ ದೇವರ ಪೂಜೆ ಮಾಡಬೇಕು. ಹಾಗೇ ಹಲವು ನೈವೇದ್ಯಗಳನ್ನು ಮಾಡಿ ಇಡುತ್ತಾರೆ. ಆದರೆ ಲಡ್ಡು ಮತ್ತು ಬೆಲ್ಲದಿಂದ ಮಾಡಿದ ಪಾಯಸವನ್ನು ಗಣೇಶನಿಗೆ ನೈವೇದ್ಯವಾಗಿ ಇಟ್ಟರೆ ಪುಣ್ಯ ಫಲ ಲಭಿಸುತ್ತದೆ. ಯಾಕೆಂದರೆ ಲಡ್ಡು ವೃತ್ತಾಕಾರದಲ್ಲಿರುವುದರಿಂದ ಅದು ಪರಿಪೂರ್ಣವಾದ ನೈವೇದ್ಯವಾಗಿದೆ. ಪಾಯಸ ಗಣೇಶನಿಗೆ ತುಂಬಾ ಪ್ರಿಯವಾದುದಾಗಿದೆ.  ಆದಕಾರಣ ತಪ್ಪದೇ ಈ 2 ನೈವೇದ್ಯವನ್ನು ಗಣೇಶನಿಗೆ ಇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ