ದೇವರ ಮುಂದೆ ಮಹಿಳೆಯರು ತೆಂಗಿನಕಾಯಿ ಒಡೆಯಬಾರದಂತೆ. ಯಾಕೆ ಗೊತ್ತಾ?

ಬುಧವಾರ, 21 ನವೆಂಬರ್ 2018 (08:03 IST)
ಬೆಂಗಳೂರು : ಹಿಂದೂ ಶಾಸ್ತ್ರ ಸಂಪ್ರದಾಯದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ಅದರಲ್ಲೂ ಪೂಜೆಯ ವೇಳೆ ಹೆಣ‍್ಣುಮಕ್ಕಳು ದೇವರ ಮುಂದೆ ತೆಂಗಿನಕಾಯಿ ಒಡೆಯಬಾರದಂತೆ.


ಹಾದು. ತೆಂಗಿನ ಕಾಯಿಯಿಲ್ಲದೆ ಮಾಡುವ ಪೂಜೆ, ಪೂಜೆ ಎಂದು ಎನಿಸಿಕೊಳ್ಳುವುದಿಲ್ಲ. ಆದರೆ ಪೂಜೆಯ ವೇಳೆ ಪುರುಷರು ಮಾತ್ರ ತೆಂಗಿನಕಾಯಿ ಒಡೆಯಬೇಕೆಂತೆ. ಮಹಿಳೆಯರು ಒಡೆಯಬಾರದಂತೆ.


ಇದಕ್ಕೆ ಕಾರಣವೆನೆಂದರೆ ವಿಶ್ವವನ್ನು ಸೃಷ್ಟಿ ಮಾಡುವ ಮೊದಲು ಬ್ರಹ್ಮ ತೆಂಗಿನ ಕಾಯಿ ಸೃಷ್ಟಿ ಮಾಡಿದನಂತೆ. ತೆಂಗಿನ ಕಾಯಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿದ್ದಾರೆಂದು ನಂಬಲಾಗಿದೆ. ಹಾಗಾಗಿ ಮಹಿಳೆಯರನ್ನು ತೆಂಗಿನ ಕಾಯಿಯಿಂದ ದೂರವಿರಿಸಲಾಗಿದೆ.


ಹಾಗೇ ತೆಂಗಿನ ಕಾಯಿಯನ್ನು ಬೀಜವೆಂದು ಪರಿಗಣಿಸಲಾಗಿದೆ. ಮಹಿಳೆ ಮಗುವಿಗೆ ಜನ್ಮ ನೀಡಿ ಕುಟುಂಬ ಬೆಳೆಸುತ್ತಾಳೆ. ಆಕೆಯೇ ಇನ್ನೊಂದು ಬೀಜವನ್ನು ಒಡೆಯೋದು ಎಷ್ಟು ಸರಿ. ಹಾಗಾಗಿ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದೆಂದು ಧರ್ಮದಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ