ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯಿಂದ ಪೂಜಿಸಿದರೆ ಈ ಲಾಭ ಗ್ಯಾರಂಟಿ

ಮಂಗಳವಾರ, 13 ಫೆಬ್ರವರಿ 2018 (05:00 IST)
ಬೆಂಗಳೂರು: ಶಿವನಿಗೆ ಪ್ರಿಯವಾದ ಹೂ ಎಂದರೆ ಬಿಲ್ವಪತ್ರೆ. ಅದಕ್ಕಾಗಿಯೇ ಹೆಚ್ಚಿನ ಶಿವ ದೇಗುಲದ ಪಕ್ಕದಲ್ಲೇ ಒಂದು ಬಿಲ್ವ ಪತ್ರೆ ಇದ್ದೇಇರುತ್ತದೆ. ಬಿಲ್ವದಿಂದ ಅರ್ಚಿಸಿದರೆ ಶಿವನಿಗೆ ನಮ್ಮ ಪ್ರಾರ್ಥನೆ ಬೇಗ ತಲುಪುವುದು ಎಂಬ ನಂಬಿಕೆಯಿದೆ.
 

ಬಿಲ್ವ ಪತ್ರೆಯಿಂದ ಪ್ರತಿನಿತ್ಯ ಶಿವನಿಗೆ ಪೂಜೆ ಮಾಡುತ್ತಾ  ಬಂದರೆ ಸಾಡೇ ಸಾಥ್ ಶನಿ ದೋಷದಿಂದ ನಿವೃತ್ತಿ ಪಡೆಯಬಹುದು ಎಂಬ ನಂಬಿಕೆಯಿದೆ. ಪ್ರದೋಷದಲ್ಲಿ ಬಿಲ್ವದಿಂದ ಪೂಜೆ ಮಾಡಿದರೆ ಪಾಪ ಪರಿಹಾರವಾಗುತ್ತದಂತೆ.

ದೇವಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುವದು. ಬಿಲ್ವ ವೃಕ್ಷಕ್ಕೆ ಪ್ರತಿ ನಿತ್ಯ ಪನ್ನೀರು ಹಾಕಿದರೆ ದಾರಿದ್ರ್ಯ ನಿವಾರಣೆಯಾಗುತ್ತದೆ. ಅದೇ ರೀತಿ ಮಹಾಲಕ್ಷ್ಮಿಗೆ ಪ್ರತಿ ನಿತ್ಯದಿಂದ ಬಿಲ್ವದಿಂದ ಅರ್ಚಿಸಿದರೆ ಧನ ಲಕ್ಷ್ಮಿ ಆಗಮನವಾಗುತ್ತದೆ. ಮುತ್ತೈದೆಯರಿಗೆ, ಬ್ರಾಹ್ಮಣರಿಗೆ ದಾನ ಮಾಡುವಾಗ ಬಿಲ್ವ ಪತ್ರೆ ಜತೆಗೆ ದಾನ ಮಾಡಿದರೆ ರೋಗ ಬಾಧೆ, ಶತ್ರು ಬಾಧೆಯಿಂದ ಮುಕ್ತಿ ಹೊಂದಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ