ಪಾಕ್ ಬೆಂಡತ್ತಿದ್ದ ಹಾರ್ದಿಕ್ ಪಾಂಡ್ಯ ಹಾಂಗ್ ಕಾಂಗ್ ವಿರುದ್ಧ ನೀರು ಸರಬರಾಜು ಆಟಗಾರ!

ಗುರುವಾರ, 1 ಸೆಪ್ಟಂಬರ್ 2022 (09:30 IST)
ದುಬೈ: ಪಾಕಿಸ್ತಾನ ವಿರುದ್ಧ ಆಲ್ ರೌಂಡರ್ ಆಟವಾಡಿ ಟೀಂ ಇಂಡಿಯಾಗೆ ರೋಚಕ ಜಯ ಕೊಡಿಸಿ ಹೀರೋ ಆಗಿದ್ದ ಹಾರ್ದಿಕ್ ಪಾಂಡ್ಯಗೆ ನಿನ್ನೆ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು.

ಹಾರ್ದಿಕ್ ಸ್ಥಾನಕ್ಕೆ ರಿಷಬ್ ಪಂತ್  ಗೆ ಅವಕಾಶ ನೀಡಲಾಗಿತ್ತು. ಹಾರ್ದಿಕ್ ನಿನ್ನೆ 12 ನೇ ಆಟಗಾರನಾಗಿದ್ದರು. ಹೀಗಾಗಿ ಮೊನ್ನೆಯ ಪಂದ್ಯದಲ್ಲಿ ಹೀರೋ ಆಗಿದ್ದ ಹಾರ್ದಿಕ್ ನಿನ್ನೆಯ ಪಂದ್ಯದಲ್ಲಿ ಸಹ ಆಟಗಾರರಿಗೆ ನೀರು ಸರಬರಾಜು ಮಾಡುತ್ತಿದ್ದರು.

ರಿಷಬ್ ಪಂತ್ ಗೆ ಅವಕಾಶ ನೀಡಲು ಒತ್ತಾಯ ಕೇಳಿಬರುತ್ತಿತ್ತು. ಇನ್ನೊಂದೆಡೆ ಮುಂದಿನ ಮಹತ್ವದ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಾರ್ದಿಕ್  ಗೆ ವಿಶ್ರಾಂತಿ ನೀಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಅವರನ್ನು ನಿನ್ನೆಯ ಪಂದ್ಯದಿಂದ ಹೊರಿಗಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ