IND vs NZ Test: ಟೀಂ ಇಂಡಿಯಾ ಆಟಗಾರರು ನಿನ್ನೆ ಏನು ಮಾಡಿದ್ರು, ಈವತ್ತೂ ಅದೇ ಗತಿಯಾ

Krishnaveni K

ಗುರುವಾರ, 17 ಅಕ್ಟೋಬರ್ 2024 (09:03 IST)
Photo Credit: X
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯದ್ದೇ ಕಾಟವಾಗಿದೆ. ಇದರಿಂದಾಗಿ ಮೊದಲ ದಿನದ ಆಟ ರದ್ದಾಗಿದೆ.

ಈ ಪಂದ್ಯದಲ್ಲಿ ಇದುವರೆಗೆ ಟಾಸ್ ಕೂಡಾ ನಡೆದಿಲ್ಲ. ನಿನ್ನೆಯ ದಿನ ಮೈದಾನ ಸ್ವಿಮ್ಮಿಂಗ್ ಪೂಲ್ ನಂತಿದ್ದ ಕಾರಣ ಸಿಬ್ಬಂದಿಗಳು ಕವರ್ಸ್ ತೆಗೆದೂ ಇರಲಿಲ್ಲ. ಮಳೆಯ ಕಾರಣದಿಂದ ಈ ಟೆಸ್ಟ್ ಪಂದ್ಯ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿಯಿದೆ. ಹೀಗಾಗಿ ಅಭಿಮಾನಿಗಳೂ ಮೈದಾನದತ್ತ ಬರುತ್ತಿಲ್ಲ.

ಈ ನಡುವೆ ಮೊದಲ ದಿನ ಆಟ ನಡೆಯುವುದು ಅನುಮಾನವಾದಾಗ ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮುಂತಾದವರು ನೇರವಾಗಿ ತಮ್ಮ ಕಿಟ್ ತೆಗೆದುಕೊಂಡು ಒಳಾಂಗಣಕ್ಕೆ ತೆರಳಿ ಅಭ್ಯಾಸಕ್ಕಿಳದಿದ್ದರು. ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರೂ ಒಳಾಂಗಣದಲ್ಲಿ ಅಭ್ಯಾಸಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

ಮೈದಾನಕ್ಕೆ ಬಂದಿದ್ದ ಕೆಲವೇ ಕೆಲವು ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರು ಅತ್ತಿತ್ತ ಓಡಾಡುವುದನ್ನೇ ನೋಡಿ ಖುಷಿಪಟ್ಟರು. ಇಂದೂ ಮಳೆಯೇ ಆಗಿದ್ದರೆ ಪಂದ್ಯ ನಡೆಯುವುದು ಅನುಮಾನ. ಹೀಗಾಗಿ ಮತ್ತೆ ಟೀಂ ಇಂಡಿಯಾ ಆಟಗಾರರು ಮೈದಾನ ಬಿಟ್ಟು ಒಳಾಂಗಣದಲ್ಲಿ ಅಭ್ಯಾಸ ನಡೆಸುತ್ತಾ ಕಾಲ ಕಳೆಯಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ