ದ.ಆಫ್ರಿಕಾದಲ್ಲಿ ಭಾರತೀಯ ಕ್ರಿಕೆಟಿಗರಿಗೆ ಮಳೆ ಸ್ವಾಗತ: ಟ್ರಾಲಿ ತಲೆಗೆ ಹೊತ್ತು ನಡೆದ ಕ್ರಿಕೆಟಿಗರು

ಶುಕ್ರವಾರ, 8 ಡಿಸೆಂಬರ್ 2023 (11:47 IST)
Photo Courtesy: Twitter
ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವರುಣನ ಸ್ವಾಗತ ಸಿಕ್ಕಿದೆ. ಹೀಗಾಗಿ ಕ್ರಿಕೆಟಿಗರು ಟ್ರಾಲಿಯ ರಕ್ಷಣೆ ಪಡೆಯಬೇಕಾಯಿತು.

ವಿಮಾನ ನಿಲ್ದಾಣದಲ್ಲಿ ಕ್ರಿಕೆಟಿಗರಿಗೆ ಮಳೆಯಿಂದಾಗಿ ಕೊಂಚ ತೊಂದರೆಯಾಯಿತು. ಮಳೆಗೆ ರಕ್ಷಣೆ ಪಡೆಯಲು ತಮ್ಮ ಸೂಟ್ ಕೇಸ್ ಗಳನ್ನೇ ತಲೆಮೇಲೆ ಹೊತ್ತು ಬಸ್ ನತ್ತ ನಡೆದ ದೃಶ್ಯ ಕಂಡುಬಂತು.

ಡಿಸೆಂಬರ್ 10 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇದಕ್ಕಾಗಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಮೊನ್ನೆಯೇ ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸಿತ್ತು.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಈ ಸರಣಿಯಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಪ್ರಮುಖರ ಅನುಪಸ್ಥಿತಿಯಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಯುವ ಪಡೆ ದ.ಆಫ್ರಿಕಾವನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ