ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಫೈನಲ್ ನಲ್ಲಿ ಮುಗ್ಗರಿಸಿದ ಕರ್ನಾಟಕ

ಮಂಗಳವಾರ, 23 ನವೆಂಬರ್ 2021 (07:38 IST)
ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ನಲ್ಲಿ ಕರ್ನಾಟಕ ಫೈನಲ್ ನಲ್ಲಿ ತಮಿಳುನಾಡು ವಿರುದ್ಧ 4 ವಿಕೆಟ್ ಗಳ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಕರ್ನಾಟಕ ಪರ ಅಭಿನವ್ ಮನೋಹರ್ 46, ಪ್ರವೀಣ್ ದುಬೆ 33 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ತಮಿಳುನಾಡು ಎನ್ ಜಗದೀಶನ್ (41), ಶಾರುಖ್ ಖಾನ್ (ಅಜೇಯ 33) ರನ್ ಗಳ ನೆರವಿನಿಂದ ಅಂತಿಮ ಎಸೆತದಲ್ಲಿ ಗೆಲುವು ಕಂಡಿತು. ಇದರೊಂದಿಗೆ ತಮಿಳುನಾಡು ಮೂರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ