ತಿರುವನಂತಪುರಂ ಸ್ಟೇಡಿಯಂ ಪಕ್ಕ ಸಂಜು ಸ್ಯಾಮ್ಸನ್ ಬೃಹತ್ ಕಟೌಟ್ ಹಾಕಿದ ಅಭಿಮಾನಿಗಳು

ಬುಧವಾರ, 28 ಸೆಪ್ಟಂಬರ್ 2022 (17:26 IST)
ತಿರುವನಂತಪುರಂ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ನಡೆಯುವ ತಿರುವನಂತಪುರಂನ ಗ್ರೀನ್ ಫೀಲ್ಡ್ ಮೈದಾನದ ಪಕ್ಕ ಕೇರಳದ ಅಭಿಮಾನಿಗಳು ಸಂಜು ಸ್ಯಾಮ್ಸನ್ ಬೃಹತ್ ಕಟೌಟ್ ಹಾಕಿ ತಮ್ಮ ಪ್ರೀತಿ ಪ್ರದರ್ಶಿಸಿದ್ದಾರೆ.

ಕೇರಳ ಮೂಲದ ಸಂಜು ಸ್ಯಾಮ್ಸನ್ ಈ ಸರಣಿಗೆ ಮತ್ತು ಟಿ20 ವಿಶ್ವಕಪ್ ಗೂ ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ. ಅವರನ್ನು ಆಯ್ಕೆ ಮಾಡದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಟೀಂ ಇಂಡಿಯಾ ಪಂದ್ಯವಾಡಲಿರುವ ಮೈದಾನದ ಪಕ್ಕವೇ ಸಂಜು ಬೃಹತ್ ಕಟೌಟ್ ಹಾಕಿ ಅಭಿಮಾನಿಗಳು ತಮ್ಮ ಮೆಚ್ಚಿನ ಆಟಗಾರನ ಮೇಲಿನ ಅಭಿಮಾನ ಪ್ರದರ್ಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ